uestion 1 Write a short composition in Kannada of approximately 250 words on any one of the following topics :- [ ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ನಿಮಗೆ ಬೇಕಾದ ಒಂದು ವಿಷಯವನ್ನು ಆರಿಸಿಕೊಂಡು ಸುಮಾರು 250 ಪದಗಳ ಸಂಕ್ಷಿಪ್ತ ಪ್ರಬಂಧ ಬರೆಯಿರಿ :- (1) ಇತ್ತೀಚೆಗೆ ವಿವಿಧ ಕಾರಣಗಳಿಂದಾಗಿ ಮುಷ್ಕರಗಳು, ಬಂದ್ಗಳು ಉಂಟಾಗುತ್ತಿರುವುದು ನಿಜಕ್ಕೂ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನದ ಮೇಲೆ ಯಾವ ರೀತಿಯಾದ ಪರಿಣಾಮ ಬೀರಿವೆ? ಈ ರೀತಿಯಾದ ಹೋರಾಟಗಳು ಅಗತ್ಯವೇ? ಚರ್ಚಿಸಿ, (ii) ಕೊರೋನಾ ಮಹಾಮಾರಿಯಿಂದ ದೇಶವೇ ಲಾಕ್ಡೌನ್ ಆದ ಸಂದರ್ಭದಲ್ಲಿ ಜನಜೀವನವೇ ಬದಲಾಗಿತ್ತು. ಇಂಥಹ ಪರಿಸ್ಥಿತಿಯಲ್ಲಿ ನೀವು ಸಮಯದ ಸದುಪಯೋಗವನ್ನು ಹೇಗೆ ಮಾಡಿಕೊಂಡಿರಿ? ಯಾವ ರೀತಿಯಲ್ಲಿ ಕಾಲ ಕಳೆದಿರಿ ? ನೀವು ಅನುಸರಿಸಿದ ನಿಯಮಗಳೇನು ? ಕಷ್ಟದಲ್ಲಿ ಸಿಲುಕಿದವರಿಗೆ ನೀವೇನು ಮಾಡಿದಿರಿ? ಒಟ್ಟಿನಲ್ಲಿ ನಿಮಗಾದ ಅನುಭವಗಳನ್ನು ವಿವರಿಸಿ ಪ್ರಬಂಧ ರಚಿಸಿ. (iii) 'ಮನಸಿದ್ದರೆ ಮಾರ್ಗವಿದೆ' – ಈ ಗಾದೆ ಮಾತಿನ ಅರ್ಥವನ್ನು ವಿವರಿಸಿ ಅಥವಾ ಈ ಗಾದೆ ಮಾತನ್ನು ಆಧರಿಸಿ ಒಂದು ಕಥೆಯನ್ನು ಬರೆಯಿರಿ.
Answers & Comments
Answer:
3)
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
Example 1 : ಸಾಮರ್ಥ್ಯ ಮತ್ತು ಪ್ರಯತ್ನಗಳು ಜೋಡೆತ್ತಿನಂತೆ ಒಟ್ಟಿಗೆ ಸಾಗಿದರೆ , ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿ . ಸಾಮರ್ಥ್ಯದ ಜೊತೆಗೆ ಕೆಲಸ ಮಾಡುವ ಮನಸ್ಸು ಬಹು ಮುಖ್ಯ .
ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾರ್ಗ ತನಗೆ ತಾನೇ ಲಭ್ಯ . ಸಾಮರ್ಥ್ಯವು ಎಷ್ಟೇ ಇದ್ದರೂ , ಸರಿಯಾದ ಪ್ರಯತ್ನವಿಲ್ಲದಿದ್ದರೆ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ ,
ಶಿವ ಕೊಟ್ಟ ಜೋಳಿಗೆ ಗೂಟಕ್ಕೆ ನೇತುಹಾಕಿದರೆ , ಜೋಳಿಗೆ ತುಂಬಲು ಸಾಧ್ಯವಿಲ್ಲ ಬದಲಾಗಿ ಮನೆ ಮನೆ ಅಲೆದು ಭಿಕ್ಷೆ ಬೇಡಿದಾಗ ಮಾತ್ರ ಅದು ತುಂಬುತ್ತದೆ .
ಹಾಗೆಯೇ , ಬಾಯಲ್ಲಿ ನಾನು ಒಳ್ಳೆ ಅಂಕ ತೆಗೆಯಬೇಕು , ಮುಂದೆ ಡಾಕ್ಟರ್ ಆಗಬೇಕು , ಜನಸೇವೆ ಮಾಡಬೇಕು , ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಬೇಕು ಎಂದು ಹೇಳಿಕೊಂಡು ತಿರುಗಿದರೆ ಅಂದುಕೊಂಡಿದ್ದನ್ನು ಸಾಧಿ ಸಲು ಸಾಧ್ಯವಾಗುವುದಿಲ್ಲ ,